ಕಾಡಿನಿಂದ ಹೊರಬಂದ ನಕ್ಸಲರು: ಶರಣಾದವರಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ

ರಾಜ್ಯ

ಬೆಂಗಳೂರು: 6 ಜನ ನಕ್ಸಲ್ ನಾಯಕರ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾಗಿದೆ, ಚಿಕ್ಕಮಗಳೂರು ಜಿಲ್ಲಾಡಳಿತ ಬದಲಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಶರಣಾಗರಾಗುತ್ತಿದ್ದಾರೆ. ಹೀಗಾಗಿ 6 ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ, ಸಂಜೆ ವೇಳೆಗೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಲಿದ್ದಾರೆ.

ಶರಣಾಗತಿಯಾಗುತ್ತಿರುವ ನಕ್ಸಲರಿಗೆ ರಾಜ್ಯ ಸರ್ಕಾರ, ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಿಸಿದೆ.

ನಿನ್ನೆ ಬೆಳಗ್ಗೆಯಿಂದ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ, ದಲಿತ ಸಂಘಟನೆ ಮುಖಂಡರು, ಶರಣಾಗುತ್ತಿರುವ ನಕ್ಸಕರ ಕುಟುಂಬದ ಸದಸ್ಯರ ಹಾಗೂ ಮಾಧ್ಯಮದವರು ಕಾಯುತ್ತಿದ್ದರು. ಆದರೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರಣಾಗತಿ ಆಗಬೇಕಿದ್ದ ಆರು ನಕ್ಸಲರನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರಿಗೆ ಕರೆತಂದು ಶರಣಾಗತಿ ಮಾಡಿಸಿದರು.

ನಕ್ಲರಿಗೆ ಪ್ಯಾಕೇಜ್ ಘೋಷಣೆ

ಈ ನಕ್ಸಲರು ಸುಮ್ಮನೆ ಶರಣಾಗುತ್ತಿಲ್ಲ ಸಾಕಷ್ಟು ಬೇಡಿಕೆಗಳನ್ನಿಟ್ಟುಕೊಂಡು ಶರಣಾಗುತ್ತಿದ್ದಾರೆ. ಶರಣಾಗತಿಯಾಗುತ್ತಿರುವ ನಕ್ಸಲರಿಗೆ ಸರ್ಕಾರ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ 3 ಕೆಟಗರಿ ಇದೆ.

ಕೆಟಗರಿ ಎ

🌑 ರಾಜ್ಯದ ನಕ್ಸಲರಾಗಿ ಆಯಕ್ಟಿವ್ ಆಗಿರಬೇಕು
🌑 ಪ್ರಕರಣ ಇದ್ರೆ 7 ಲಕ್ಷದ 50 ಸಾವಿರ ಹಣ
🌑 ಆಯುಧಗಳನ್ನ ಹಾಜರುಪಡಿಸಿದ್ರೆ ಹಣ
🌑 ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ.

ಕೆಟಗರಿ ಬಿ

🌑 ಹೊರರಾಜ್ಯವರಾಗಿ ಆಯಕ್ಟಿವ್ ಆಗಿರಬೇಕು
🌑 ಒಂದಕ್ಕಿಂತ ಹೆಚ್ಚು ಪ್ರಕರಣ ಇದ್ರೆ 4 ಲಕ್ಷ ಹಣ
🌑 ಆಯುಧಗಳನ್ನ ಹಾಜರುಪಡಿಸಿದ್ರೆ ಹಣ
🌑 ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ

ಕೆಟಗರಿ ಸಿ

🌑 ಎಡಪಂಥೀಯ ಭಯೋತ್ಪಾದನಾ ಚಟುಟಿಕೆ ಬೆಂಬಲಿಸುವವರು
🌑 ನಕ್ಸಲರ ಸಂಪರ್ಕ ಹೊಂದಿ ಪ್ರಕರಣಗಳು ಇದ್ರೆ 2 ಲಕ್ಷ ಹಣ
🌑 ಆಯುಧಗಳನ್ನ ಹಾಜರುಪಡಿಸಿದ್ರೆ ಸರ್ಕಾರದಿಂದ ಹಣ
🌑 ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ

ಶಸ್ತ್ರಾಸ್ತ್ರ ಹಾಗೂ ಆಯುಧ ನೀಡಿದರೆ ಹಣ

ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರ ಹಾಗೂ ಆಯುಧಗಳನ್ನು ನೀಡಿದರೂ ಸಹ ಅವುಗಳಿಗೆ ತಕ್ಕಂತೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಯಾವುದಕ್ಕೆ ಎಷ್ಟು ಹಣ ಎನ್ನುವ ವಿವರ ಈ ಕೆಳಗಿನಂತಿದೆ.

ಶರಣಾಗುವ ನಕ್ಸಲರು ಯಾರು ?

1) ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
2) ವನಜಾಕ್ಷಿ (ಬಾಳೆಹೊಳೆ ಕಳಸ)
3) ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
4) ಮಾರಪ್ಪ ಅರೋಳಿ (ರಾಯಚೂರು)
5) ವಸಂತ ಟಿ (ತಮಿಳುನಾಡು)
6) ಎನ್. ಜೀಶಾ (ಕೇರಳ)

ಪ್ಯಾಕೇಜ್​ಗೆ ಸುನಿಲ್ ಕುಮಾರ್ ತೀವ್ರ ಆಕ್ರೋಶ

6 ಜನ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಶಾಸಕ ವಿ ಸುನಿಲಕುಮಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಪೋಸ್ಟ್ ಮಾಡಿ ಅಸಮಾಧಾನ ಹೊರ ಹಾಕಿರುವ ಸುನಿಲಕುಮಾರ, ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿಯಾಗಿದ್ದ ತಣ್ಣಗಿನ ಮಲೆನಾಡಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತಿರಾ ಸಿದ್ದರಾಮಯ್ಯನವರೇ ? ಇದರಿಂದ ಪೊಲೀಸರ ಆತ್ಮ ಸ್ಥೈರ್ಯ ಏನಾಗಬೇಡ ? ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *