ಅಂಬೇಡ್ಕರ್‌ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಯನಗುಂಟಿಕರ್ ಆಯ್ಕೆ 

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಶಹಾಬಾ‌ದ್
ಡಾ.ಬಿ.ಆರ್ ಅಂಬೇಡ್ಕರ್‌ ಅವರ 135ನೇ ಜಯಂತ್ಯೋತ್ಸವ ಸಮಿತಿಯ ತಾಲೂಕು ಅಧ್ಯಕ್ಷರಾಗಿ ರಾಜೇಶ ಯನಗುಂಟಿಕರ ಮತ್ತು ಗೌರವ ಅಧ್ಯಕ್ಷರಾಗಿ ವಸಂತ ಕೆ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖಂಡರಾದ ಮಲ್ಲಣ್ಣ ಮಸ್ಕಿ, ಸತೀಶ ಕೋಬಾಳಕರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ಆಚರಿಸಲು ಸಮಿತಿ ರಚಿಸಲಾಗಿದೆ ಎಂದರು.

ಮಲ್ಲಣ್ಣ ಮರತೂರ, ಶಿವಶಾಲ ಪಟ್ಟಣಕರ್‌, ಸುಭಾಷ ಸಾಕ್ರೆ, ಮಲ್ಲಿಕಾರ್ಜುನ ಕಟ್ಟಿ, ಮೋಹನ ಹಳ್ಳಿ, ಮಲ್ಲಿಕಾರ್ಜುನ ಹಳ್ಳಿ, ನಿಂಗಪ್ಪ ಕನಗನಹಳ್ಳಿ, ಮಹಾದೇವ ತರನಳ್ಳಿ, ಪುನೀತ ಹಳ್ಳಿ, ಮನೋಹರ ಕೊಳ್ಳೂರ, ಸುನೀಲ ದೊಡ್ಡಮನಿ, ಮಲ್ಲಿಕಾರ್ಜುನ ತೆಗನೂರ, ಬಸವರಾಜ ಮಯೂರ, ಪರಶುರಾಮ ಚಲವಾದಿ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದರು.

ಸಮಿತಿ ರಚನೆಯಲ್ಲಿ ದಸಂಸ ಹಿರಿಯ ಮುಖಂಡರಾದ ಮರಿಯಪ್ಪ ಹಳ್ಳಿ ಮತ್ತು ರಾಮಕುಮಾರ ಸಿಂಗೆ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *