ಸುದ್ದಿ ಸಂಗ್ರಹ ಕಲಬುರಗಿ
ಕಸಾಪ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಬಸವೇಶ್ವರ ಬಳಗದ ಗೌರವ ಸಲಹೆಗಾರ ಮುಡಬಿ ಗುಂಡೇರಾವ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ನಗರದ ಕನ್ನಡ ಭವನದ ಆವರಣದಲ್ಲಿ ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್ ಬಿರಾದಾರ, ಸದಸ್ಯರಾದ ಧರ್ಮರಾಜ ಜವಳಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಸಂತೋಷ ಕುಡಳ್ಳಿ, ಮಹಾಲಿಂಗಪ್ಪ ಮುಲಗೆ, ಬಸವಪ್ರಭು ಜಿ.ಮುಡಬಿ ಸೇರಿದಂತೆ ಅನೇಕರು ಇದ್ದರು.