ಚಿತ್ತಾಪುರ: ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು, ಅನ್ಯ ಭಾಷಿಗರಿಗೆ ಕನ್ನಡ ಕಲಿಸಬೇಕು, ಕನ್ನಡ ಕಟ್ಟುವ ಕೆಲಸ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ ಕಾಶಿರಾಯ ಕಲಾಲ್ ಹೇಳಿದರು.
ಪಟ್ಟಣದ ಶಹಾಬಾದ ರಸ್ತೆಯ ಬಸವೇಶ್ವರ ವಿದ್ಯಾ ಸಂಸ್ಥೆಯ ಅಣೆಮ್ಮ ಗೊಬ್ಬರ ಪ್ರೌಢಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಸರಣಿ ಉಪನ್ಯಾಸ ಕಾರ್ಯಕ್ರಮ-3ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು-ನುಡಿಯ ರಕ್ಷಣೆಗೆ ಮುಂದಾಗಬೇಕು ಎಂದರು.
ಕನ್ನಡ ನಾಡಿಗೆ ಬಸವಾದಿ ಶರಣರ ಕೊಡುಗೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದವರು ಬಸವಾದಿ ಶರಣರು ಕನ್ನಡವನ್ನು ಜನಸಾಮಾನ್ಯರ ಭಾಷೆಯನ್ನಾಗಿಸಿದ್ದಾರೆ. ವಚನ ಸಾಹಿತ್ಯ ಕನ್ನಡದ ಹೃದಯ. ಶರಣ ಸಂಸ್ಕೃತಿ ಎಂದರೆ ಅದು ಕನ್ನಡದ ಸಂಸ್ಕೃತಿಯಾಗಿದೆ. ಕನ್ನಡಕ್ಕೆ ತಾಕತ್ತು ನೀಡಿದವರು ಬಸವಾದಿ ಶರಣರು. ವೈಚಾರಿಕತೆಯ ಸಮ-ಸಮಾನತೆಯ ನಾಡನ್ನು ಕಟ್ಟಿದವರು ಬಸವಾದಿ ಶರಣರಾಗಿದ್ದಾರೆ. ಕಾಯಕ-ದಾಸೋಹ ಸಂಸ್ಕೃತಿ ನೀಡಿದ್ದಾರೆ. ಜಾಗತಿಕ ಎಲ್ಲಾ ಸಮಸ್ಯೆಗಳಿಗೆ ವಚನ ಸಾಹಿತ್ಯ, ಬಸವಾದಿ ಶರಣರ ತತ್ವದಲ್ಲಿ ಪರಿಹಾರವಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಕಸಾಪ ಕಾಳಗಿ ತಾಲೂಕಾ ಅಧ್ಯಕ್ಷ ಸಂತೋಷ ಕುಡಳ್ಳಿ, ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಸಾಹಿತಿ ನರಸಪ್ಪ ಚಿನ್ನಕಟ್ಟಿ, ಶಾಲೆಯ ಮುಖ್ಯ ಶಿಕ್ಷಕರಾದ ಕಸ್ತೂರಿ ಎಸ್.ಪಾಟೀಲ್, ದೇವೀಂದ್ರಪ್ಪ ಇಮಡಾಪುರ, ಅಂಬರೀಶ್, ಸಲೀಮ್, ಮನೋಹರ ಬಾಬು, ಶಂಕರ ರಾಠೋಡ, ಕರಬಸಮ್ಮ, ಲಲಿತಮ್ಮ ರೇಶ್ಮಿ ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು