ರಾಷ್ಟ್ರೀಯ ಕರಕುಶಲ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಶಿಲ್ಪಿಗೆ ಗೌರವ

ನಗರದ

ಕಲಬುರಗಿ: ಶಿಲ್ಪ ಕಲಾವಿದ, ಸಾಂಪ್ರದಾಯಿಕ ಕುಸುರಿ ಕೆತ್ತನೆಯ ಪರಿಣಿತ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಅಭಿನಂದಿಸಲಾಯಿತು.

ನಗರದ ನ್ಯೂ ರಾಘವೇಂದ್ರ ಕಾಲೋನಿಯ ನಿವಾಸಿ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಕೇಂದ್ರ ಜವಳಿ ಸಚಿವಾಲಯದ 2024ನೇ ಸಾಲಿನ “ರಾಷ್ಟ್ರೀಯ ಕರಕುಶಲ ಪ್ರಶಸ್ತಿ” ದೊರೆತಿರುವ ಪ್ರಯುಕ್ತ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಂಜೆ ಶಿಲ್ಪಿಯವರಿಗೆ ಸತ್ಕರಿಸಿ, ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಸದಸ್ಯ ಅಸ್ಲಾಂ ಶೇಖ್, ಶಿಲ್ಪಿಯವರ ಕುಟುಂಬ ಸದಸ್ಯರಾದ ದೇವಕಮ್ಮ ಸಿ.ಶಿಲ್ಪಿ, ಗಾಯತ್ರಿ ಶಿಲ್ಪಿ, ಪ್ರವೀಣ ಶಿಲ್ಪಿ, ಸ್ವರಾಂಕ ಇದ್ದರು.

Leave a Reply

Your email address will not be published. Required fields are marked *