ಚಿತ್ತಾಪುರ: ಹಿರಿಯ ನಾಗರಿಕರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ ಇರದೆ ಇರುವವರಿಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ.50 ರಷ್ಟು ರಿಯಾಯ್ತಿ ದರದಲ್ಲಿ ಪಾಸ್ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಹೊಂಗಿರಣ ತಾಲೂಕಾ ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಮ್ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಗುರುವಾರ ತಹಸೀಲ್ದಾರರಿಗೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೆ ರೀತಿಯ ಹೆಬ್ಬಟ್ಟಿನ ಸಹಿ ಬರುತ್ತಿಲ್ಲ. ಸದರಿ ಪಡಿತರ ಚೀಟಿ ಪಡೆಯಲು ಸರಕಾರ ಇ-ಶ್ರಮ ಕಾರ್ಡ ಇದ್ದವರಿಗೆ ಮಾತ್ರ ಪಡಿತರ ಚೀಟಿ ನೀಡಲಾಗುವದು ಎಂದು ಸರಕಾರ ಆದೇಶ ಹೊರಡಿಸಲಾಗಿದೆ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಇ-ಶ್ರಮ ಕಾರ್ಡ ಆಗುವುದಿಲ್ಲ. ಅವರಿಗೆ ಯಾವುದೆ ತರಹದ ಸೌಲಭ್ಯಗಳು ಪಡೆದುಕೊಳ್ಳಲು ತೊಂದರೆಯಾಗುತ್ತಿದೆ ಎಂದರು.
ಈ ಕುರಿತು ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಸುಸುತ್ರವಾಗಿ ಹಾಗೂ ಮನೆ ಮನೆ ಬಾಗಿಲಿಗೆ ಕಲ್ಪಿಸುವ ಸೌಲಭ್ಯ ಒದಗಿಸಿಕೊಡುತ್ತೆನೆಂದು ಹೇಳಿದರೂ ಸಹಿತ ಯಾವುದೆ ಒಬ್ಬ ಕಡು ಬಡವ ಫಲಾನುಭವಿಗೆ ಸೌಲಭ್ಯ ಸಿಗುತ್ತಿಲ್ಲಾ. ಲಾಕ್ ಡೌನ್ ಕ್ಕಿಂತ ಮೊದಲು ರೈಲಿನಲ್ಲಿ ಪ್ರಯಾಣಿಸಲು ಹಿರಿಯ ನಾಗರಿಕರಿಗೆ ಶೇ.50 ರಿಯಾಯ್ತಿ ದರದಲ್ಲಿ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಲಾಕ್ ಡೌನ್ ನಂತರ ಹಿರಿಯ ನಾಗರಿಕರಿಗೆ ರಿಯಾಯ್ತಿ ದರ ರದ್ದುಪಡಿಸಲಾಗಿದೆ. ಹಿರಿಯ ನಾಗರಿಕರಿಗೆ ಬಸ್ ಪ್ರಯಾಣಿಕ್ಕೆ ರಿಯಾಯಿತಿ ದರದಲ್ಲಿ ರಾಜ್ಯ ಸರಕಾರ ಕಡಿಮೆಗೊಳಿಸಿದ. ಇದರಿಂದ 60 ವರ್ಷ ಮೇಲ್ಪಟ್ಟ ಯಾವುದೆ ಒಂದು ಸರಕಾರಿ ಸೌಲಭ್ಯಗಳಾದ ಮಾಶಾಸನ, ಆಹಾರ ಧಾನ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನಾನುಕೂಲವಾಗುತ್ತಿದೆ. ಹೀಗಾಗಿ ಕೂಡಲೇ ಇ-ಶ್ರಮ ಕಾರ್ಡ ಇಲ್ಲದೆ 60 ವರ್ಷ ಮೇಲ್ಪಟ್ಟ ಕಡುಬಡವರಿಗೆ ಹಿರಿಯ ನಾಗರಿಕ ಮತ್ತು ನಾಗರಿಕಿಯರಿಗೆ ತಕ್ಷಣವೇ ಪಡಿತರ ಚೀಟಿ ಹಾಗೂ ರೈಲ್ವೆ ಪಾಸ್ ರಿಯಾಯ್ತಿ ದರದಲ್ಲಿ ನೀಡುವ ಕುರಿತು ಆದಷ್ಟು ಬೇಗನೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಮಲ್ಲಿನಾಥ ಪಾಟೀಲ, ರವೀಂದ್ರ ತೇಲ್ಕರ್, ಅಬ್ದುಲ್ ಖಾದರ್, ನರಹರಿ ಕುಲಕರ್ಣಿ, ರಮೇಶ್ ಕಟ್ಟಿಮನಿ, ಚಂದು ಮೆಂಗಜಿ, ರಾಜಣ್ಣ ಪೀರಪ್ಪ, ಬಾಬು ಹೇರೂರು, ದಶರಥ ವಟಿವಟಿ, ಅಂಬಾದಾಸ ಬಸುದೆ, ಮಿರಾಜೋದ್ದಿನ್ ಪಟೇಲ್ ಸೇರಿದಂತೆ ಊ ಇದ್ದರು.