40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ: 1.4 ಕೋಟಿ ರೂ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ

ರಾಷ್ಟೀಯ

ಸುದ್ದಿ ಸಂಗ್ರಹ ಗಾಜಿಯಾಬಾದ್
ಭರ್ಜರಿ ವೇತನ ಪಡೆಯುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಇದೀಗ ದಿಢೀರ್ ಕೆಲಸ ಕಳೆದುಕೊಂಡು ತನ್ನ ಮನೆ ಉಳಿಸಿಕೊಳ್ಳಲು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಧಾರುಣ ಕಥೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಸಾಫ್ಟ್’ವೇರ್ ಉದ್ಯೋಗ, ಕೈ ತುಂಬ ಸಂಬಳ ಎಂದು ಮಿತಿಮೀರಿ ಖರ್ಚು ಮಾಡುವವರೆ ಹೆಚ್ಚು, ಆದರೆ ಉಳಿತಾಯ ಎನ್ನುವುದು ಇಲ್ಲದೆ ಹೋದರೆ ಎಂತಹ ದೊಡ್ಡ ಸಂಬಳ ಕೂಡ ಮನಷ್ಯನನ್ನು ಸಂಕಷ್ಟದಿಂದ ರಕ್ಷಿಸಲಾರದು ಎಂಬುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ದೇಶದ ಪ್ರತಿಷ್ಟಿತ ಸಂಸ್ಥೆಯಲ್ಲಿ ಟೆಕ್ಕಿಯಾಗಿ ಉದ್ಯೋಗ ಗಳಿಸಿದ್ದು, ವಾರ್ಷಿಕ 40 ಲಕ್ಷ ರೂ ಸಂಬಳ ಇನ್ನೇನು ತನ್ನ ಕಷ್ಟಗಳೆಲ್ಲಾ ದೂರಾಗಿ ಐಶಾರಾಮಿ ಜೀವನ ನಡೆಸಬಹುದು ಎಂದು ಭಾವಿಸಿದ್ದನು.

ಅದರಂತೆ 2024ರಲ್ಲಿ ಇದೆ ಘಾಜಿಯಾಬಾದ್ ಪ್ರತೀಕ್ ಗ್ರ್ಯಾಂಡ್ ಸಿಟಿಯಲ್ಲಿ 1.4 ಕೋಟಿ ರೂ ಮೌಲ್ಯದ 3 BHK ಅಪಾರ್ಟ್ ಮೆಂಟ್ ಖರೀದಿಸಿದ್ದ. ಇದು ಆತನ ಕನಸು ಕೂಡ ಆಗಿತ್ತು. ಅದರಂತೆ ಮಾಸಿಕ 95 ಸಾವಿರ ರೂ ಇಎಂಐ ಪಾವತಿಸಬೇಕಿತ್ತು. ತನ್ನ ಉದ್ಯೋಗ ಮತ್ತು ಆದಾಯ ಹೀಗೆ ಸ್ಥಿರವಾಗಿರುತ್ತದೆ ಎಂದು ವಿಶ್ವಾಸದಲ್ಲಿದ್ದನು, ಆದರೆ ದಿಢೀರ್ ಒಂದು ದಿನ ಆ ಪ್ರತಿಷ್ಠಿತ ಸಂಸ್ಥೆ ಸಾಮೂಹಿಕ ವಜಾ ಘೋಷಣೆ ಮಾಡಿತ್ತು. ಆ ಪಟ್ಟಿಯಲ್ಲಿ ಈ ಸಾಫ್ಟ್’ವೇರ್ ಎಂಜಿನಿಯರ್ ಕೂಡ ಇದ್ದ. ಈ ವೇಳೆ ಆ ಟೆಕ್ಕಿ ಮೇಲೆ ಆಕಾಶವೆ ತಲೆ ಮೇಲೆ ಬಿದ್ದಂತಾಯಿತು. ಕೆಲಸವಿಲ್ಲ ಆದಾಯವೂ ಇಲ್ಲ ಮನೆ ಸಾಲ, ದೈನಂದಿನ ಖರ್ಚು ವೆಚ್ಚಗಳ ಹೇಗೆ ಸರಿದೂಗಿಸುವುದು ಎಂದು ಚಿಂತಿಸತೊಡಗಿದೆ.

ಬೇರೆ ಸಂಸ್ಥೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿದರೂ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಮೂರು ತಿಂಗಳಿನಿಂದ ಯಾವುದೆ ಆದಾಯವಿಲ್ಲ, ಒಂದು ಕಾಲದಲ್ಲಿ ದಿನಚರಿಯಂತೆ ಕಾಣುತ್ತಿದ್ದ ಇಎಂಐ ಈಗ ಆತಂಕದ ನಿರಂತರ ಮೂಲವಾಗಿದೆ. ಸಾಲದ ಬಾಧ್ಯತೆಗಳು ನಿರಂತರವಾಗಿ ಮುಂದುವರೆದಿದೆ.

ಟೆಕ್ಕಿಯಾಗಿದ್ದವ ಈಗ ರ‍್ಯಾಪಿಡೊ ಚಾಲಕ
ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ನಿಭಾಯಿಸಲು, ಆತ ಈಗ ರ‍್ಯಾಪಿಡೊ ರೈಡರ್ ಆಗಿ ಕೆಲಸ ಮಾಡಲು ಆರಂಭಿಸಿದ್ದಾನೆ. ತನ್ನ ಮನೆ ಉಳಿಸಿಕೊಳ್ಳಲು ಆತ ಹರಸಾಹಸ ಪಡುತ್ತಿದ್ದಾನೆ. ಆತನ ಪ್ರತಿ ರೈಡ್ ತನ್ನ ದೊಡ್ಡ ಮಾಸಿಕ ಬಾಕಿಯನ್ನು ಪೂರೈಸಲು ಒಂದು ಸಣ್ಣ ಮೊತ್ತ ಕೊಡುಗೆ ನೀಡುತ್ತಿದೆ.

ಇತ್ತೀಚೆಗೆ ಅವರನ್ನು ಭೇಟಿಯಾದ ಸ್ನೇಹಿತನೊಬ್ಬ ಇವಿಷ್ಟೂ ಘಟನೆಯನ್ನು ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ನೇಹಿತನ ಭಾವನಾತ್ಮಕ ಒತ್ತಡದ ಗೋಚರ ಲಕ್ಷಣಗಳನ್ನು ಗಮನಿಸಿದ್ದಾನೆ. ಹೊಸ ಉದ್ಯೋಗವನ್ನು ಪಡೆಯುವ ಅನಿಶ್ಚಿತತೆಯು ಆತನ ಒತ್ತಡವನ್ನು ಹೆಚ್ಚಿಸಿದೆ. ಒಂದು ಕಾಲದಲ್ಲಿ ಕನಸಾಗಿದ್ದ ಮನೆ ಇದೀಗ ಆತನ ಚಿಂತೆಯ ಮೂಲವಾಗಿದೆ.

ಹೆಚ್ಚು ಸ್ಥಿರವಾದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರದ ಪರಿಣಾಮಗಳೊಂದಿಗೆ ಅವರು ಹೋರಾಡುತ್ತಿರುವಾಗ, ನಿದ್ದೆಯಿಲ್ಲದ ರಾತ್ರಿ ಮತ್ತು ಹಗಲು ಈಗ ಆತನ ಆಲೋಚನೆಯಲ್ಲಿ ಪ್ರಾಬಲ್ಯ ಹೊಂದಿದೆ. ಐಟಿಯಂತಹ ವಲಯಗಳಲ್ಲಿ, ಹೆಚ್ಚಿನ ಸಂಬಳವು ದೀರ್ಘಕಾಲೀನ ಭದ್ರತೆಯ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *