ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ

ಸುದ್ದಿ ಸಂಗ್ರಹ ಬೆಂಗಳೂರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ 9 ಜಿಲ್ಲೆಗಳ ಕಚೇರಿ ಕೆಲಸದ ವೇಳಾಪಟ್ಟಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಂದರೆ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಈ ಹೊಸ ವೇಳಾಪಟ್ಟಿ ಜಾರಿಯಲ್ಲಿರಲಿದೆ. ಬದಲಾದ ಸಮಯದ ವಿವರ ಅವಧಿ: 2026ರ ಏಪ್ರಿಲ್ […]

Continue Reading

ಏಪ್ರಿಲ್ 1ರಿಂದ ಆನ್‌ಲೈನ್ ಪಾವತಿಯಲ್ಲಿ ಮಹತ್ವದ ಬದಲಾವಣೆ

ಸುದ್ದಿ ಸಂಗ್ರಹ ಹೊಸದಿಲ್ಲಿ ಆರ್ಥಿಕ ವರ್ಷ 2026-27ನೇ ಸಾಲಿಗೆ ಅನ್ವಯವಾಗುವಂತೆ, ಬ್ಯಾಂಕಿಂಗ್ ನಿಯಮದಲ್ಲಿ ಹಲವು ಬದಲಾವಣೆಗಳು ಆಗಲಿದೆ. ಏಪ್ರಿಲ್ 1, 2026ರಿಂದ ಜಾರಿಗೆ ಬರುವಂತೆ, ಆನ್‌ಲೈನ್ ಪಾವತಿಯ ವೇಳೆ ಒಟಿಪಿ ನಮೂದಿಸುವ ವಿಧಾನದಲ್ಲಿ ಹೊಸ ಸಿಸ್ಟಂ ಪಾಲಿಸಬೇಕಾಗುತ್ತದೆ. ಹೆಚ್ಚುತ್ತಿರುವ ಡಿಜಿಟಲ್ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳಿಂದಾಗಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಮಹತ್ತರ ಬದಲಾವಣೆ ಜಾರಿಗೆ ಬರಲಿದೆ. ಈಗಾಗಲೇ, ಹೊಸದಾಗಿ ಅಪ್ಲೈ ಮಾಡಲು ಅಥವಾ ನವೀಕರಣ ಮಾಡಲು, ಪ್ಯಾನ್ ಕಾರ್ಡ್ ನಿಯಮದಲ್ಲಿ ಬದಲಾವಣೆಯನ್ನು ಪ್ರಕಟಿಸಲಾಗಿದೆ. ಆನ್‌ಲೈನ್ ಪಾವತಿಯ ವೇಳೆ […]

Continue Reading

ಮುಂದಿನ 2 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸುದ್ದಿ ಸಂಗ್ರಹ ಬೆಂಗಳೂರು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಹಲವು ಜಿಲ್ಲೆಗಳಿಗೆ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಬೀದರ್, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುಡುಗು […]

Continue Reading

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 50 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಸೀಜ್: ಐವರು ಅರೆಸ್ಟ್

ಸುದ್ದಿ ಸಂಗ್ರಹ ಬೆಂಗಳೂರು ಇಲ್ಲಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  50 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, 5 ಮಂದಿಯನ್ನು ಬಂಧಿಸಿದ್ದಾರೆ. ಅಬ್ದುಲ್ ಬಷೀದ್ ಹಾಗೂ ಮಗ ಮೊಹಮದ್ ಅಶೀಕ್ ಸೇರಿದಂತೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ, ಗುಲಾಮ್ ಹುಸೇನ್ ಖಾನ್ ಬಂಧಿತ ಆರೋಪಿಗಳು. ನಕಲಿ ಸಿಗರೇಟ್ ಜಾಲದ ಬಗ್ಗೆ ಅನ್ವೇಷ್ ಐಪಿಆರ್ ಸಂಸ್ಥೆ ನೀಡಿದ ದೂರಿನ ಮೇರೆಗೆ ತಂದೆ ಹಾಗೂ ಮಗ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು […]

Continue Reading

ವಾಡಿಯಲ್ಲಿ ಮನ್ ಕೀ ಬಾತ್ ವೀಕ್ಷಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್‌’ನ 132ನೇ ಸಂಚಿಕೆಯನ್ನು ಮುಖಂಡರು ವೀಕ್ಷಿಸಿದರು. ಪ್ರಧಾನಮಂತ್ರಿಯವರು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಇರಾನ್-ಅಮೇರಿಕಗಳ ಯುದ್ಧ ಮತ್ತು ಅದರ ಪರಿಣಾಮವಾಗಿ ಉಂಟಾಗಬಹುದಾದ ತೈಲ ಮತ್ತು ಅನಿಲ ಬಿಕ್ಕಟ್ಟಿನ ಬಗ್ಗೆ ಮಾತನಾಡಿದರು. ಕರೋನಾದಂತಹ ಕಠಿಣ ಪರಿಸ್ಥಿತಿಯನ್ನು ನಾವು ಹೇಗೆ ಎದುರಿಸಿದೆವೋ, ಹಾಗೆಯೇ ಪ್ರಸ್ತುತ ಜಾಗತಿಕ ಸವಾಲುಗಳಿಂದಲೂ ನಾವು ಹೊರಬರಲಿದ್ದೆವೆ ಎಂಬ ಭರವಸೆಯ ಮಾತುಗಳನ್ನು ಆಲಿಸಿ, ಅವರು ದೇಶಕ್ಕಾಗಿ ತೆಗೆದುಕೊಳ್ಳುತ್ತಿರುವ ದಿಟ್ಟ ನಿರ್ಧಾರಗಳನ್ನು ಬಿಜೆಪಿ ಅಧ್ಯಕ್ಷ […]

Continue Reading

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸತ್ಕರಿಸಿದ ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್

ಸುದ್ದಿ ಸಂಗ್ರಹ ಚಿತ್ತಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (TAPCMS)ಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ದೇವಿಂದ್ರ ಅರಣಕಲ್ ಅವರು ಬೆಂಗಳೂರಿನ ಸರ್ಕಾರಿ ಗೃಹ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಿಗೆ ಬುದ್ಧನ ಪ್ರತಿಮೆ ನೀಡಿ ಗೌರವಿಸಿದ ದೇವಿಂದ್ರ ಅರುಣಕಲ್ ಅವರು, ಸಹಕಾರ ಸಂಘದ ಮುಂದಿನ ಕಾರ್ಯವೈಖರಿ ಹಾಗೂ ರೈತರ ಹಿತರಕ್ಷಣೆ […]

Continue Reading

14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ನೋಕಿಯಾ

ಸುದ್ದಿ ಸಂಗ್ರಹ ಹೆಲ್ಸಿಂಕಿ ಒಂದು ಕಾಲದಲ್ಲಿ ವಿಶ್ವದ ನಂಬರ್‌ 1 ಫೋನ್‌ ತಯಾರಕಾ ಕಂಪನಿ ಫಿನ್ಲೆಂಡ್‌ ಮೂಲದ ನೋಕಿಯಾ 14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾಗಿದೆ. ನೋಕಿಯಾ ತನ್ನ ಜಾಗತಿಕ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.20ರಷ್ಟು ಕಡಿಮೆ ಮಾಡಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ವಿಶ್ವಾದ್ಯಂತ 74 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಭಾರತದಲ್ಲೆ ಸುಮಾರು 17 ಸಾವಿರ ನೌಕರರಿದ್ದಾರೆ. ನೋಕಿಯಾದ ಭಾರತದ ಕಾರ್ಯಕ್ಷಮತೆ ಕುಸಿತದಲ್ಲಿದೆ. 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಮಾರಾಟ ಆದಾಯ ವರ್ಷದಿಂದ ವರ್ಷಕ್ಕೆ 15%ರಷ್ಟು ಕುಸಿದು […]

Continue Reading

ಅಂಬೇಡ್ಕರ್‌ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಯನಗುಂಟಿಕರ್ ಆಯ್ಕೆ 

ಸುದ್ದಿ ಸಂಗ್ರಹ ಶಹಾಬಾ‌ದ್ ಡಾ.ಬಿ.ಆರ್ ಅಂಬೇಡ್ಕರ್‌ ಅವರ 135ನೇ ಜಯಂತ್ಯೋತ್ಸವ ಸಮಿತಿಯ ತಾಲೂಕು ಅಧ್ಯಕ್ಷರಾಗಿ ರಾಜೇಶ ಯನಗುಂಟಿಕರ ಮತ್ತು ಗೌರವ ಅಧ್ಯಕ್ಷರಾಗಿ ವಸಂತ ಕೆ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖಂಡರಾದ ಮಲ್ಲಣ್ಣ ಮಸ್ಕಿ, ಸತೀಶ ಕೋಬಾಳಕರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ಆಚರಿಸಲು ಸಮಿತಿ ರಚಿಸಲಾಗಿದೆ ಎಂದರು. ಮಲ್ಲಣ್ಣ ಮರತೂರ, ಶಿವಶಾಲ ಪಟ್ಟಣಕರ್‌, ಸುಭಾಷ ಸಾಕ್ರೆ, ಮಲ್ಲಿಕಾರ್ಜುನ ಕಟ್ಟಿ, ಮೋಹನ ಹಳ್ಳಿ, […]

Continue Reading

ಮಾತೆಯ ಮಮತೆಯ ಸವಿಯುಂಡವರೇ ಧನ್ಯರು: ಡಾ.ಲೀಲಾದೇವಿ ಆರ್ ಪ್ರಸಾದ್

ಸುದ್ದಿ ಸುದ್ದಿ ಸಂಗ್ರಹ ಚಿತ್ತಾಪುರ ಜಗತ್ತಿನಲ್ಲಿ ಮಾತೆಯ ಪ್ರೀತಿಯಷ್ಟು ನಿಷ್ಕಲ್ಮಶವಾದದ್ದು ಮತ್ತೊಂದಿಲ್ಲ. ಅವಳ ಮಮತೆಯ ಸವಿಯನ್ನುಂಡವರೇ ಧನ್ಯರು ಎಂದು ಮಾಜಿ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ್ತಿ ಡಾ.ಲೀಲಾದೇವಿ ಆರ್ ಪ್ರಸಾದ ಹೇಳಿದರು. ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಗುರುವಾರ ನಡೆದ ಶ್ರೀಮಠದ ಅನ್ನಪೂರ್ಣೆ, ಲಿಂ.ಗೌರಮ್ಮ ತಾಯಿಯವರ ಪುಣ್ಯೆಸ್ಮರಣೋತ್ಸವ ಹಾಗೂ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಮಾತೋಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರತಿಫಲವನ್ನು ನಿರೀಕ್ಷಿಸದೇ ಪ್ರೀತಿ ಕೊಡುವ ಏಕೈಕ ಜೀವ ಎಂದರೆ […]

Continue Reading

ಮಳಖೇಡದಲ್ಲಿ ಮಾ.26ರಿಂದ 28 ರವರೆಗೆ ಉರೂಸ್ ಸಂಭ್ರಮ

ಸುದ್ದಿ ಸಂಗ್ರಹ ಸೇಡಂತಾಲೂಕಿನ ಮಳಖೇಡದಲ್ಲಿರುವ ಹಝರತ್ ಸೈಯದ್ ಶಾಹ್ ಖಲಿಫತ್ ಊರ್ ರಹಮಾನ್ ಖಾದ್ರಿ ದುರ್ಗಾ ಶರೀಫ್’ನಲ್ಲಿ ಮಾ.26ರಿಂದ 28ರವರೆಗೆ ವಾರ್ಷಿಕ ಉರೂಸ್ ಶರೀಫ್ (ಜಾತ್ರೆ) ಜರುಗಲಿದೆ ಎಂದು ಹಝರತ್ ಅಲ್ ಹಜ್ ಸೈಯದ್ ಶಾಹ ಮುಸ್ತಫಾ ಖಾದ್ರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ರಾತ್ರಿ 8.30ಕ್ಕೆ ಗುರುವಾರ ಹಲಖಾ (ಪ್ರಾರ್ಥನೆ) ಮತ್ತು ಗುಸುಲ್ ಶರೀಫ್ (ಗದ್ದುಗೆಗೆ ಅಭಿಷೇಕ), 27ರಂದು ಸಂದಲ್ ನಡೆಯುವುದು, ಮಳಖೇಡ, ಹೂಡಾ(ಬಿ), ಸಂಗಾವಿ, ಮಳಖೇಡ ಸ್ಟೇಷನ್ ಕೂನ್ನೂರ ಮತ್ತು ದಿಗ್ಗಾಂವ್ ಗ್ರಾಮಗಳಿಂದ […]

Continue Reading