ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ಮಲ್ಲಮ್ಮ ಐದು ವಾರಗಳ ನಂತರ ಮನೆಯಿಂದ ಹೊರಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಲ್ಲಮ್ಮ ಯಾದಗಿರಿ ಜಿಲ್ಲೆಯ ಸುರಪುರದ ಸಣ್ಣ ಹಳ್ಳಿಯಿಂದ ಬಂದ ಸಾದಾ ಸೀದಾ ಮಹಿಳೆ ಮಲ್ಲಮ್ಮ. ಸುಮಾರು 15 ವರ್ಷಗಳ ಹಿಂದೆ ಜೀವನ ಕಟ್ಟಿಕೊಳ್ಳಲು ಕೂಲಿ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಬಿಗ್ಬಾಸ್ ಎಂಬ ಖ್ಯಾತ ರಿಯಾಲಿಟಿ ಶೋ ದಲ್ಲಿ ಪಾಲ್ಗೊಂಡು ಇಡಿ ಕರ್ನಾಟಕ ಗುರ್ತಿಸುವ ಮಟ್ಟಿಗೆ ಆಗಿದ್ದಾರೆ.
ಬಿಗ್ಬಾಸ್ ವೇದಿಕೆ ಮೇಲೆ ಮಲ್ಲಮ್ಮ ಅವರಿಗೆ ಲೆಮೆನ್ ಟೀ ಯಾವಾಗ ಮಾಡಿಕೊಡ್ತಿರಾ ಎಂದು ಕಿಚ್ಚ ಸುದೀಪ್ ತಮಾಷೆ ಮಾಡಿದ್ದರು. ಮಲ್ಲಮ್ಮ ಆಡುವ ಲೆಮೆನ್ ಟೀ ಎನ್ನುವ ಮಾತು ಎಂತವರಿಗೂ ನಗೆ ಬರುಸುತ್ತದೆ. ಇದೀಗ ಕಿಚ್ಚ ಸುದೀಪ್ ಅವರಿಗೆ ಮಲ್ಲಮ್ಮ ಉಡುಗೊರೆಯೊಂದನ್ನು ಕೊಡೋಕೆ ಸಿದ್ಧವಾಗಿದ್ದಾರೆ.
ಬಿಗ್ಬಾಸ್ ಮನೆಗೆ ಹೋಗಿ ಬಂದ ಮಲ್ಲಮ್ಮನಿಗೆ ಒಂದು ಆಸೆಯಂತೆ. ಬಿಗ್ಬಾಸ್ ಶೋನ ನಿರೂಪಕರಾದ ಕಿಚ್ಚ ಸುದೀಪ್ ಅವರಿಗೆ ಜಾಕೆಟ್ ಉಡುಗೊರೆ ನೀಡಲು ತಯಾರಿ ಮಾಡಿಕೊಂಡಿದ್ದಾರಂತೆ. ಮಲ್ಲಮ್ಮ ಅವರಿಗೆ ಕೆಲಸಕೊಟ್ಟ ಪಲ್ಲವಿ ಅವರು ಹಾಗೂ ಅವರ ತಂಡ ಈ ನಿಟ್ಟಿನಲ್ಲಿ ಜಾಕೆಟ್ ನೀಡೋಕೆ ತಯಾರಿ ಮಾಡಿಕೊಂಡಿದ್ದೆವೆ ಎಂದು ಮಾದ್ಯಮ ಸಂದರ್ಶನದಲ್ಲಿ ಮಲ್ಲಮ್ಮ ಮಾಹಿತಿ ಹಂಚಿಕೊಂಡಿದ್ದಾರೆ.